ಗುರುವಾರ, ಡಿಸೆಂಬರ್ 21, 2017

ಹಗಲು ಕನಸು

ಕೆಂದುಟಿಯ ಕೆಂಪಿನಲಿ
ಬಿಳಿ ಸೀರೆ ನೀರೆಯಲಿ ನೀ
ಬಂದ  ಆ ಕ್ಷಣವು ಮನೋಹರ.....!!

ಮುಂಗುರುಳ ಸರಿಸುತಲಿ
ಕಿರುನಗೆಯ ಬೀರುತಿರೆ, ಹೊಂಬೆಳಕು
ಸುಳಿಯುತಿದೆ ಮನದಾಳಕ್ಕೀಗ....

ನಿನ್ನ ಅಂದಿನ ನೋಟ
ಮಿಂಚಿನ ವೇಗದ ಸನ್ನೆ, ಗಾಯ
ಮಾಡಿತು ಎನ್ನ ಈ ಪುಟ್ಟ ಹೃದಯಕೆ...

ಏನೆಂದು ಕೇಳಲಿ? ಹೇಗೆ ನಾ
ತಲುಪಲಿ? ಮುಜುಗರದ ಹೃದಯವು
ವಿರಹ ಸುಖ ಅನುಭವಿಸುತಿರೆ.....

ನೀ ಬಂದ ಘಳಿಗೆಯನು
ಪುನಃ ಬಣ್ಣಿಸಲೇನು? ಸಮನಾದುದಿಲ್ಲ
ಪ್ರಿಯೆ ಈ ಹಗಲು ಕನಸಿಗೆ.....!!!
               
                                      -ಎಂ.ಕೆ.ಹರಕೆ 

1 ಕಾಮೆಂಟ್‌:

ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...