ಮನಸ್ಸು ಹತಾಶಯ!
ಬವಣೆ ಬಲಶಾಲಿ!
ನಿದಿರೆ ಉಪಕಾರಿ?
ಸಾತ್ವಿಕತೆ ಕಾಣ್ತಿಲ್ಲ ,
ಸದ್ಗುಣ ಒಲಿತಿಲ್ಲ ,
ಶಿಸ್ತು-ಸಂಯಮ ಎನಗಿಲ್ಲ!
ಆದರೂ,
ನಾ ಹೇಗೆ ಒಪ್ಪಿಕೊಳ್ಳಲಿ ಅಪ್ರಯೋಜಕನೆಂದು?
![](https://blogger.googleusercontent.com/img/b/R29vZ2xl/AVvXsEjtza2MEzlB5G1QbST-8ub-z-kZPHp2VKeASIyZzG6aSOntaKEC2Naa8bJ2oCujMh80inFiryQ5C4eCHLS4u1ZQaAufehCWWP3pVfDqbXrQebMr0Nq7gO1bznBsYUFizFEOo7MTzlODeyI/s1600/1582628218079905-0.png)
( ಚಿತ್ರಕೃಪೆ: ಅಂತರ್ಜಾಲ)
ತಿರುಗುವ ಭುವಿಯು ತಿರುಗುತ್ತಿರುವಂತೆ
ಬಾನಿನ ಭಾನು ಪ್ರಕಾಶಿಸುವಂತೆ
ನದಿಯು ಕಣಿವೆಗಳಲ್ಲಿ ಅನುಕ್ಷಣವು ಹರಿವಂತೆ
ಸಾಗಿದೆ, ನನ್ನೀ ಬದುಕು ಗೊತ್ತು - ಗುರಿಯಿಲ್ಲದೆ!
ಜ್ಞಾನದ ಕಿಡಿ ಅವಿತು ಬೂದಿಯೊಳ್ ಮುಚ್ಚಿರೆ
ಅಜ್ಞಾನದ ಮಾಯೆಗೆ, ಮಾಯವಾಗಿದೆ ಅರಿವು!
ತಿಳಿವಳಿಕೆಯ ಸಂಚಾರ ಆಮೆಗತಿಯಲ್ಲಿರಲು
ಸಂಧಿಸುವ ಶುಭ-ಕ್ಷಣಕೆ ಮನ ಮಿಡಿದು ಕಾದಿದೆ!
ಪರಿವೆಯ ಅಮೃತತ್ವಕೆ ತಂಪಾಗುವುದೇ ಉದರ?
ಬಲವಂತದ ಬದಲಾವಣೆಗೆ ಇಳಿವುದೇ ಮನ(ಣ)ಭಾರ?
ಇರಲಿ ಈ ಕಾತುರ , ಇರಲಿ ಈ ಅವಸರ!
ಆಂತರ್ಯದ ಅಂಜಿಕೆ ತೊಲಗಿ, ಶುರುವಾಗಲಿ ನವಸಂವತ್ಸರ!
-ಎಂ.ಕೆ.ಹರಕೆ