ಭಾನುವಾರ, ಡಿಸೆಂಬರ್ 10, 2017

ಪರಿಭ್ರಮಣೆ..!


 ◆ಪರಿಭ್ರಮಣೆ◆

        ಪರಿಭ್ರಮಿಸು ಎನ್ನೆದೆಯ 
ಒಡಲ ಸುತ್ತುವರೆದು ನಾ ಬೇಡವೆಂದರೂ
            ನೀ ಪೋಗದೆ....
         
       ಕಳವಳದಿ ನಿಟ್ಟುಸಿರ
ಬಿಡದೇ ಪಾಡುವೆ ನಿನ್ನ , ಒಡಲಾಳ
      ಒಂಚೂರು ಬಿಡದೆ..
         
       ಹೊಚ್ಚ ಹೊಸ ಭಾವನೆಯ 
ಮೆಲುಕು ಹಾಕುವ ಮನಕೆ ಸಾಂಗತ್ಯ
       ಕಲ್ಪಿತ ಭಾಗವಾಗಿ....

ಬಾದೇವಿ ಸರಸ್ವತಿಯೇ
ಹೃದಯಾಂತರಾಳಕೆ ಉದಯಿಸಿದ ಸ್ವರವು
        ಕೈ ಜಾರುವ ಮುನ್ನ..

                   
                          -ಎಂ.ಕೆ.ಹರಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅಂಬೇಡ್ಕರ್!

 ನಿನ್ನ ಹೆಸರು ಕೇಳಿದರೆ ಗರ್ವ ಪಡಬೇಕಿದ್ದ ಜನ, ನಿನ್ನನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸಿ ಕನಿಷ್ಠರಾಗಿದ್ದಾರೆ! ನಿನ್ನ ಕುರಿತು ಒಂದು ಪುಟ ಓದದ ಜನ, ನಿನ್ನನ್ನು ಗ...