ಶನಿವಾರ, ಡಿಸೆಂಬರ್ 23, 2017

ಪ್ರಕೃತಿಯ ತಂಪು

ಅತೀವ ತಂಪಿನ ಹಸಿರಾದ ಪ್ರಕೃತಿಯು ಮರೆಯಾದ
ಭಾಸ್ಕರನ ಸ್ವಾಗತಿಸುತಲಿತ್ತು...
ಹನಿಹನಿಯಾಗಿ ಉದುರುವ ಮಂಜಿನ ಹನಿಗಳು
ಮನದ ಅರಿಕೆಯ ಬಡಿದೆಬ್ಬಿಸುತಲಿತ್ತು...

ದೂರದೀ ಎಲ್ಲೋ ಸಂಗೀತದಲೆಗಳು ಕಾಣದ
ಕಣ್ಣಿಗೆ ಅಪ್ಪಳಿಸಿದಂತಿತ್ತು!!
ಬೆಚ್ಚಗೆ ಪಕ್ಕದಲಿ ಮಲಗಿದ್ದ ಕುನ್ನಿಯ ಅಪ್ಪುಗೆಯ
ಕಾವು ಹೃದಯದೊಳ್ ಏರುತ್ತಲಿತ್ತು...

ಹೊರಸಲಿನ ಮುಂಭಾಗ ಹೂತಿದ್ದ ಕಂಬವು
ಪವನನಾರ್ಭಟಕ್ಕೆ ಜೋಲಾಡುತಿತ್ತು..
ನಭದಿಂದ ಹೊರಟ ಮಿಂಚಿನ ಕಿರಣಗಳು
ನಾಮುಂದು ತಾಮುಂದು ಎನ್ನುತಲಿತ್ತು...   
              
ಮೇಘಗಳ ತಿಕ್ಕಾಟಕ್ಕೆ ಹೆದರಿದ ಮಳೆರಾಯ
ಕೇರಿಯ ಕೆರೆಯಲ್ಲಿ ತಲ್ಲೀನನಾದ...
ವರುಣನ ರೌದ್ರನೃತ್ಯಕ್ಕೆ ಒಲೆರಾಯ ನೆನೆ-ನೆನೆದು
ಉರಿಯದೆ ಸುಮ್ಮನಾದ...

ಸುಳಿವೇ ನೀಡದೆ ಒಡನೆ ಬಂದಂತ ವರುಣನ
ಆರ್ಭಟ ಕೇಳುವ ಮಹನೀಹನಾರು?
ದೀಪದ ಬೆಳಕಿಗೆ ಕಣ್ಣಾಗಿ ಕುಳಿತಿರುವ ಹೊಂಬೆಳಕ
ಚೆಲುವೆ ಹೇಳೇ ನೀನಾರು!??

                                     ●ಎಂ.ಕೆ.ಹರಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...