ಬಾರದ ಲೋಕಕ್ಕೆ ಹೊರಟರೂ ನಿನ್ನ ನಾ,ಬಿಡದೆ
ಹಿಂಬಾಲಿಸುವೆ ಪ್ರೇಮಮುಗ್ಧನಂತೆ...
ನಿನ್ನ ಆ ಮೊದಲ ತೊದಲು ಮಾತೇ ಸಾಕು ಎನ್ನ
ಈ ಹೃದಯಾಂತರಂಗಕೆ....
ನೀನಾಗೆ ಬಾ ಗೆಳತಿ ಎನ್ನ ಹೃದಯ ಮಂದಿರಕೆ
ಪೂಜೆಯ ವೇಳೆಗೆ ನೀ ತಡಮಾಡದೆ
ಅತೀವ ತಂಪಿನ ಹಸಿರಾದ ಪ್ರಕೃತಿಯು ಮರೆಯಾದ
ಭಾಸ್ಕರನ ಸ್ವಾಗತಿಸುತಲಿತ್ತು...
ಹನಿಹನಿಯಾಗಿ ಉದುರುವ ಮಂಜಿನ ಹನಿಗಳು
ಮನದ ಅರಿಕೆಯ ಬಡಿದೆಬ್ಬಿಸುತಲಿತ್ತು...
ದೂರದೀ ಎಲ್ಲೋ ಸಂಗೀತದಲೆಗಳು ಕಾಣದ
ಕಣ್ಣಿಗೆ ಅಪ್ಪಳಿಸಿದಂತಿತ್ತು!!
ಬೆಚ್ಚಗೆ ಪಕ್ಕದಲಿ ಮಲಗಿದ್ದ ಕುನ್ನಿಯ ಅಪ್ಪುಗೆಯ
ಕಾವು ಹೃದಯದೊಳ್ ಏರುತ್ತಲಿತ್ತು...
ಹೊರಸಲಿನ ಮುಂಭಾಗ ಹೂತಿದ್ದ ಕಂಬವು
ಪವನನಾರ್ಭಟಕ್ಕೆ ಜೋಲಾಡುತಿತ್ತು..
ನಭದಿಂದ ಹೊರಟ ಮಿಂಚಿನ ಕಿರಣಗಳು
ನಾಮುಂದು ತಾಮುಂದು ಎನ್ನುತಲಿತ್ತು...
ಮೇಘಗಳ ತಿಕ್ಕಾಟಕ್ಕೆ ಹೆದರಿದ ಮಳೆರಾಯ
ಕೇರಿಯ ಕೆರೆಯಲ್ಲಿ ತಲ್ಲೀನನಾದ...
ವರುಣನ ರೌದ್ರನೃತ್ಯಕ್ಕೆ ಒಲೆರಾಯ ನೆನೆ-ನೆನೆದು
ಉರಿಯದೆ ಸುಮ್ಮನಾದ...
ಸುಳಿವೇ ನೀಡದೆ ಒಡನೆ ಬಂದಂತ ವರುಣನ
ಆರ್ಭಟ ಕೇಳುವ ಮಹನೀಹನಾರು?
ದೀಪದ ಬೆಳಕಿಗೆ ಕಣ್ಣಾಗಿ ಕುಳಿತಿರುವ ಹೊಂಬೆಳಕ
ಚೆಲುವೆ ಹೇಳೇ ನೀನಾರು!??
●ಎಂ.ಕೆ.ಹರಕೆ
ಚಿತ್ರಕೃಪೆ : ಅಂತರ್ಜಾಲ ಕಣ್ಣ ತುಂಬ ಹಸಿರು ತುಂಬಿ ಮನಸು ಈಗ ಅಲೆವ ದುಂಬಿ! ಜೀಪು ಹತ್ತಿ ಕುಳಿತೆವು.. ಅಗ್ಗು ತಗ್ಗು ಜಿಗಿದವು!!. ಧೂಳು ದಣಿವು ಅಂಟಲಿಲ್ಲ ಕೂಡಿ ನಡ...