ಭಾನುವಾರ, ನವೆಂಬರ್ 22, 2020

'ವೈಷ್ಣವ ಜನತೋ' ಕನ್ನಡ ಅನುವಾದ

ಸರ್ವರ ಕಷ್ಟವ ಅರಿತು ನೀ ನಡೆದರೆ
(ಎಲ್ಲರ ಬೇವಿಗೆ ಬೆಲ್ಲ ನೀನಾದರೆ)
ಕಲ್ಲಿನ ದೇವನೂ ಕರಗುವನು!
ಉಪಕಾರದ ಅಭಿಮಾನವ ಮರೆತರೆ
ಪುಣ್ಯದ ಹೊಳೆಯನು ಹರಿಸುವನು!!

ಲೋಕದಿ ಸಕಲರೂ ಬಂಧುಗಳಂತೆ
ನಿಂದಿಸದಿರು ನೀ ಯಾರನ್ನೂ
ನಡೆ-ನುಡಿಯಲ್ಲಿ ಮಡಿವಂತನಾದರೆ
ತಾಯಿಗೆ ಸಿರಿತನ ಬೇಕೇನು?

ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ಅಸತ್ಯವ ನುಡಿದು 
ನೀ ಪರಸ್ವತ್ತಿಗೆ ಕೈ ಹಾಕದಿರು!!

'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ 
ಸಕಲ ತೀರ್ಥಂಗಳೂ ಎದೆಯೊಳಗೆ!!

ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!



~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
 
(ಕನ್ನಡ ಭಾವಾನುವಾದ : ಮಾಳಿಂಗರಾಯ ಹರಕೆ)





2 ಕಾಮೆಂಟ್‌ಗಳು:

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...