ಹಸಿರು ಹುಲ್ಲಿನ ಮುದ್ದಾದ ಗಿರಿಧಾಮಗಳೆ,
ನಿಮ್ಮನ್ನು ಸೃಷ್ಟಿಸಿದ ನಿರ್ಮಾತೃ ಅವನಾರು?
ಹಸಿರನ್ನೇ ಹೊದ್ದ ಮಲೆನಾಡ ತಾಯೇ,
ನಿನ್ನೀ ಸೌಂದರ್ಯಕ್ಕೆ ಸರಿಸಾಠಿ ಯಾರು?
ಮಲೆನಾಡ ಮಧುರತೆ ಜನ-ಮನವನು ತಣಿಸಿದೆ
ಹಿಂಬಾಲಿಸಿ ಸಾಗಿದ ದಾರಿ,ಕಣ್ತುಂಬ ಕುಣಿದಿದೆ…
ಅಂಭುಜದ ರವಿಮಾಮ ಕಣಿವೆಯೊಳ್ ಅವಿತಿರಲು
ನಮ್ಮ ಆಗಮನ ಅರಿತು,ನಾಚುತ ಹೊರಬರುತಿಹನು…
ಕಾಫಿಯ ಘಮಘಮ ಗಮನವನು ಸೆಳೆದಿರಲು
ಉಪ್ಪಿಟ್ಟಿನ ಸ್ವಾದಕೆ ನಾಲಿಗೆ ಹದಗೊಂಡಿದೆ…
ಓಡಾಡಿದ ಕಾಲ್ಗಳು ದಣಿವನ್ನೇ ಮರೆತಿರಲು
ಸೌಂದರ್ಯೋಪಾಸನೆಯ ಸವಿಗೆ ಮೈಮರೆತು ಸಾಗಿವೆ…
ಜುಳು-ಜುಳು ಸ್ವರನಾದ ಕಿವಿಯೊಳ್ ಗುಣುಗುತ್ತಿರಲು
ಆಲಿಸಿದ ಮನವೀಗ ನೀರಿನೊಳ್ ಧುಮುಕಿದೆ..
ಜಾರುವ ಬಂಡೆಗಳಲಿ ಮೀಯುವುದೇ ಮಹಾಭಾಗ್ಯ
ಮಹಾಮಜ್ಜನದನುಭವವನು ಪಡೆದವನೇ ಧನ್ಯ!!
-ಎಂ.ಕೆ.ಹರಕೆ
ಸುಂದರ ನೋಟ ಅನುಭವ ಕಣ್ಣ ಮುಂದೆ ಬಂದು ಹಾದು ಹೋಯಿತು... ಮಾರ್ರೇ..
ಪ್ರತ್ಯುತ್ತರಅಳಿಸಿthanks narasanna!
ಅಳಿಸಿಸುಂದರ ನೋಟ ಅನುಭವ ಕಣ್ಣ ಮುಂದೆ ಬಂದು ಹಾದು ಹೋಯಿತು... ಮಾರ್ರೇ..
ಪ್ರತ್ಯುತ್ತರಅಳಿಸಿಹೌದು
ಪ್ರತ್ಯುತ್ತರಅಳಿಸಿ