ಶುಕ್ರವಾರ, ಜನವರಿ 12, 2018

ಚುಟುಕು ಸಾಹಿತ್ಯ🏃

                                                          ಚಿತ್ರಕೃಪೆ:ಅಂತರ್ಜಾಲ

                   ★ "ಕವಿತೆ" ★
ಪ್ರಾಸಗಳ ಹುಡುಕುತ್ತಾ ಸವೆಯಿತು ಕವಿ ಹೃದಯ
ಕವಿತೆಯನ್ನೇ ಧಿಕ್ಕರಿಸಿ ಸಾಗಿತ್ತು ಆ ಸಮಯ!
ಸಮಯಾಸಮಯದಿ, ಕಂಡನಾ ಭವ್ಯ ರೂಪ
ಬರೀ ಕನಸಲ್ಲೇ ಆ ಕನ್ಯೆಗೆ ತಾನಾದನು ಭೂಪ!
ಅಮೃತದ ಘಳಿಗೆಯಲಿ ನೂರಾರು ಸಿಹಿಗನಸು
ಕನಸಿನ ಸಾಮ್ರಾಜ್ಯಕ್ಕೆ ತಾನೇ ಪಟ್ಟದರಸು!
ನಿತ್ಯವೂ ಕೌತುಕದಿ ಶೃಂಗಾರ ಪ್ರಣಯ ಗೀತೆ
ರೋಸಿದ ಕವಿ-ಹೃದಯಕ್ಕೆ ಹೊಳೆಯಿತು ಈ ಕವಿತೆ!!


                      ◆"ಜೀವನ"◆
ಭವನೆ ಬೇಗೆಗಳಿಗೆ ಕೊನೆಯಿಲ್ಲದ ಜೀವನ
ಪ್ರೀತಿ-ಮಮತೆ,ವಾತ್ಸಲ್ಯ ಬಿತ್ತರಿಸುವ ಜೀವನ
ಹಬ್ಬ-ಹರಿದಿನಗಳಂತೆ ವಿಜೃಂಭಿಸುವ ಜೀವನ
ಮನದ ನಕಾಶೆಯನ್ನು ಪ್ರತಿಬಿಂಬಿಸುವ ಜೀವನ!!
ಜೀವ ಎಂಬೆರಡಕ್ಷರಕ್ಕೆ ತಾನಾಗಿರುವ 'ಜೀವ'ನ
ಸಂಸ್ಕಾರವೆಂಬುದರಿಯದೇ ಒದ್ದಾಡುವ ಜೀವನ
ಸಾಧನೆಯ ಮಡಿಲನ್ನು ಕಂಡರಿಯದ ಜೀವನ
ಕಾಣದ ಆ ಪಥವ ಅರಸುತ್ತಿರುವ ಜೀವನ!!


                    ■ ಸಾಧನೆ ■
ಗುರಿ-ಸಾಧನೆಯೆಂಬುದು 'ಸ್ವಾರ್ಥ'ವೇ?
ತ್ಯಾಗ,ಪರಹಿತಕ್ಕಿಂತ ಮಿಗಿಲಾದುದಿಲ್ಲವೇ?
ಕಪಟ-ಮೋಸದ ಸಮಾಜ ನೋಡಲು ಸುಂದರವೇ?
ಅಥವಾ ಕಾಣುವ ನಮ್ಮ ನಯನಗಳೇ ಅಶಕ್ತವೇ?!
ಬಿಳಿಹಾಳೆಯಲ್ಲಿನ ಕರಿಚುಕ್ಕಿಯೇ ವಿಶೇಷ
ವ್ಯಕ್ತಿತ್ವಕ್ಕೆ ಕಡೆಗೆ ಸಾಧನೆಯೇ ಶೇಷ....
ಅಮರವಾಗುವವು ವ್ಯಕ್ತಿಯ ಬರಹ-ಕವಿತೆ ಮಾತ್ರ
ಆದರದರಲ್ಲಿರಲಿ ನಿಷ್ಕಲ್ಮಶ ಪ್ರೀತಿ-ಭಾವಗಳ ಸೂತ್ರ..





                        ◆  ತೃಪ್ತಿ  ◆
ಚಿಂತೆಯೆಂಬ  ಚಿತೆಯಲ್ಲಿ ಬೇಯದೆ,
ನಗುವೆಂಬ ಬಾಳಧರಣಿಯಲ್ಲಿ ಬದುಕು.....
ಅತಿಯಾಸೆಯೆಂಬ ಆನೆಯ ಬಯಸದೆ,
ತೃಪ್ತಿಯೆಂಬ ನಾಯಿ ಕುನ್ನಿಯನು ಸಾಕು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...