ಮಂಗಳವಾರ, ಫೆಬ್ರವರಿ 25, 2020

ನವ ಸಂವತ್ಸರ

ಆಲಸ್ಯ ಅದ್ವಿತೀಯ!
ಮನಸ್ಸು ಹತಾಶಯ!
ಬವಣೆ ಬಲಶಾಲಿ!
ನಿದಿರೆ ಉಪಕಾರಿ?
ಸಾತ್ವಿಕತೆ ಕಾಣ್ತಿಲ್ಲ ,
ಸದ್ಗುಣ ಒಲಿತಿಲ್ಲ ,
ಶಿಸ್ತು-ಸಂಯಮ ಎನಗಿಲ್ಲ!
ಆದರೂ, 
ನಾ ಹೇಗೆ ಒಪ್ಪಿಕೊಳ್ಳಲಿ ಅಪ್ರಯೋಜಕನೆಂದು?

           ( ಚಿತ್ರಕೃಪೆ: ಅಂತರ್ಜಾಲ)


ತಿರುಗುವ ಭುವಿಯು ತಿರುಗುತ್ತಿರುವಂತೆ
ಬಾನಿನ ಭಾನು ಪ್ರಕಾಶಿಸುವಂತೆ
ನದಿಯು ಕಣಿವೆಗಳಲ್ಲಿ ಅನುಕ್ಷಣವು ಹರಿವಂತೆ
ಸಾಗಿದೆ, ನನ್ನೀ ಬದುಕು ಗೊತ್ತು - ಗುರಿಯಿಲ್ಲದೆ!

ಜ್ಞಾನದ ಕಿಡಿ ಅವಿತು ಬೂದಿಯೊಳ್ ಮುಚ್ಚಿರೆ
ಅಜ್ಞಾನದ ಮಾಯೆಗೆ, ಮಾಯವಾಗಿದೆ ಅರಿವು!
ತಿಳಿವಳಿಕೆಯ ಸಂಚಾರ ಆಮೆಗತಿಯಲ್ಲಿರಲು
ಸಂಧಿಸುವ ಶುಭ-ಕ್ಷಣಕೆ ಮನ ಮಿಡಿದು ಕಾದಿದೆ!

ಪರಿವೆಯ ಅಮೃತತ್ವಕೆ  ತಂಪಾಗುವುದೇ ಉದರ?
ಬಲವಂತದ ಬದಲಾವಣೆಗೆ ಇಳಿವುದೇ ಮನ(ಣ)ಭಾರ?
ಇರಲಿ ಈ ಕಾತುರ , ಇರಲಿ ಈ ಅವಸರ!
ಆಂತರ್ಯದ ಅಂಜಿಕೆ ತೊಲಗಿ, ಶುರುವಾಗಲಿ ನವಸಂವತ್ಸರ!
 
                                     -ಎಂ.ಕೆ.ಹರಕೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...