ಕವಿತೆಯನ್ನೇ ಧಿಕ್ಕರಿಸಿ ಸಾಗಿತ್ತು ಆ ಸಮಯ!
ಸಮಯಾಸಮಯದಿ, ಕಂಡನಾ ಭವ್ಯ ರೂಪ
ಬರೀ ಕನಸಲ್ಲೇ ಆ ಕನ್ಯೆಗೆ ತಾನಾದನು ಭೂಪ!
ಕನಸಿನ ಸಾಮ್ರಾಜ್ಯಕ್ಕೆ ತಾನೇ ಪಟ್ಟದರಸು!
ನಿತ್ಯವೂ ಕೌತುಕದಿ ಶೃಂಗಾರ ಪ್ರಣಯ ಗೀತೆ
ರೋಸಿದ ಕವಿ-ಹೃದಯಕ್ಕೆ ಹೊಳೆಯಿತು ಈ ಕವಿತೆ!!
ಪ್ರೀತಿ-ಮಮತೆ,ವಾತ್ಸಲ್ಯ ಬಿತ್ತರಿಸುವ ಜೀವನ
ಹಬ್ಬ-ಹರಿದಿನಗಳಂತೆ ವಿಜೃಂಭಿಸುವ ಜೀವನ
ಮನದ ನಕಾಶೆಯನ್ನು ಪ್ರತಿಬಿಂಬಿಸುವ ಜೀವನ!!
ಸಂಸ್ಕಾರವೆಂಬುದರಿಯದೇ ಒದ್ದಾಡುವ ಜೀವನ
ಸಾಧನೆಯ ಮಡಿಲನ್ನು ಕಂಡರಿಯದ ಜೀವನ
ಕಾಣದ ಆ ಪಥವ ಅರಸುತ್ತಿರುವ ಜೀವನ!!
ತ್ಯಾಗ,ಪರಹಿತಕ್ಕಿಂತ ಮಿಗಿಲಾದುದಿಲ್ಲವೇ?
ಕಪಟ-ಮೋಸದ ಸಮಾಜ ನೋಡಲು ಸುಂದರವೇ?
ಅಥವಾ ಕಾಣುವ ನಮ್ಮ ನಯನಗಳೇ ಅಶಕ್ತವೇ?!
ವ್ಯಕ್ತಿತ್ವಕ್ಕೆ ಕಡೆಗೆ ಸಾಧನೆಯೇ ಶೇಷ....
ಅಮರವಾಗುವವು ವ್ಯಕ್ತಿಯ ಬರಹ-ಕವಿತೆ ಮಾತ್ರ
ಆದರದರಲ್ಲಿರಲಿ ನಿಷ್ಕಲ್ಮಶ ಪ್ರೀತಿ-ಭಾವಗಳ ಸೂತ್ರ..