ಶನಿವಾರ, ಅಕ್ಟೋಬರ್ 26, 2019

'ದಣಿ'ವು

ದಣಿವಾರಿಸುವ ಮನವೇ ದಣಿವೆಂದು ಮಲಗಿರುವಾಗ,
ದಣಿವು ನೀಗಿಸಲು ನೀನಾರ ಕೃಪೆ ಕೋರುವೆ?
ದಿಕ್ಕು-ದೆಸೆಯಿಲ್ಲದ ಅಜ್ಞಾತ ವಾಸವ ತೊರೆದು
ಕರೆದು ಕೂಡಿಕೊ, ದೈವ ಕೃಪಾಪೋಷಿತ ನಾಟಕದಲಿ!!

      ( ಚಿತ್ರ ಕೃಪೆ: ಅಂತರ್ಜಾಲ)


ದಣಿವಿಕೆಗೆ ಬಳಲಿ ನೀ, ಸೊರಗಿ ನೀರಾದರೆ
'ದಣಿ' ಎಂಬ ಸಂಭೋದನೆ ನಿನ್ನೊಡಲ ಅರಸದು!
'ಆಳಾಗಿ ದುಡಿ, ಅರಸನಾಗಿ ಉಣ್ಣು' - ಎಂಬಂತೆ
ದಣಿಯ ಗದ್ದುಗೆಗೆ 'ದಣಿವೇ' ಮೂಲಾಧಾರ!

ದಣಿವೆಂಬುದು ಒಡಲೊಳಗೆ ಕ್ಷಣ ಕ್ಷಣಕೂ ಹೆಚ್ಚುವುದು
ಧನಾತ್ಮಕ ಚಿಂತನದ ಹೊರತು, ಇದರಳಿವಿಗೆ ಎಣೆಯಿಲ್ಲ!
ದುಡಿದು-ದುಡಿದು ನೀ ದಣಿವನ್ನೇ ಸತಾಯಿಸಿ ನೋಡು
ದಣಿವಿಗೂ ಬ್ಯಾಸರಾಗಿ ಕಡೆಗೆ, ನಿನ್ನೊಡಲ ಬಿಟ್ಟೋಡುವುದು!

                                                   ~ಎಂ.ಕೆ.ಹರಕೆ


ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...