ಶುಕ್ರವಾರ, ಮಾರ್ಚ್ 23, 2018

ಪುನಃ ಹಾಡಿತು....




ಭಾವ ಭಾವಗಳ ಸುಳಿಯಲ್ಲಿ
ಮಿಂದೇಳುವ ಓ ಮನವೇ....
ಕ್ರಮಿಸಿದ ದೂರವ ನೆನೆದು ದುಃಖಿಯಾಗಬೇಡ..
ಉಳಿದ ಪಥವನು ಕಂಡು ನಿಟ್ಟುಸಿರನು ಬಿಡಬೇಡ....

ಭಾವನೆಗಳ ಸಾಗರವೇ ಸಾರ್ಥಕ ಬದುಕಿಗೆ ಸಾಕ್ಷಿ
ಪ್ರತಿ ಭಾವದಂಚಿನಲೂ ತೆರೆದಿರಲಿ ನಿನ್ನ ಅಕ್ಷಿ.....
ನೋಡುವ ಕಂಗಳಿಗೆ ಕಂಡರೂ ಬಹುರೂಪ
ಚಿಂತನ-ಮಂಥನದಿಂದ ಕಾಣ್ವುದು ಕಟುಸತ್ಯ.....

ಪರಿಪರಿಯಾಗಿ ಪಾಡುತಿದೆ, ಹೃದಯಾಂತರಾಳ...!
ಏನಾಗಿದೆ, ನಿನಗೆ ಸರಿಯಾಗಿಸು ನಿನ್ನ ಬದುಕೆಂದು..!!
ಎಲ್ಲಿ ನಿನ್ನಯ ನಿಷ್ಠೆ, ಎಲ್ಲಿ ನಿನ್ನಯ ಶ್ರಮ?
ಎಲ್ಲಿ ಅಡಗಿತು ಆ ನಿನ್ನ ಹೊಸ ವರ್ಷದ ಸಂಕಲ್ಪ??
                                               

                       
ಪುನಃ ಹಾಡಿತು..........
ಸತ್ಯಕ್ಕೆ ಎದೆಗುಂದದೆ, ಸುಳ್ಳಿನ ಬಳಿಜಾರದೆ;
ದಾಸ್ಯಕ್ಕೆ ಸಿಲುಕದೆ, ಮೋಹಕ್ಕೆ ಬಲಿಯಾಗದೆ;
ಸಿಟ್ಟಿಗೆ ನೀ ಸುಡದೆ, ಲೋಭಕ್ಕೆ ಮರುಳಾಗದೆ;
ಸವೆಸು ಈ ದೇಹವ ಪರಮಾತ್ಮನ ಪರಿಕಲ್ಪನೆಯಲ್ಲಿ...
       
                                      ~ಎಂ.ಕೆ. ಹರಕೆ

       




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...